Friday 30 August 2013

ಕೊನೆಯೆಂದು............

ಪ್ರೀತಿಯ ಸುಂದ್ರು ..


ತುಂಬಾನೇ ದಿನದಿಂದ....... ಅಲ್ಲಾ ವರ್ಷ ಗಳಿಂದ 

ನಿನ್ನಲ್ಲಿ ಒಂದು ವಿಚಾರ ಹೇಳಲೇ ಬೇಕು ಅಂತ ಕಾಯುತ್ತಿದ್ದೆ .... 

ನೀನು ಎದುರಾದಾಗೆಲ್ಲಾ ನನ್ನ ಮನದಲ್ಲಿ ಹೇಳಲೋ ಬೇಡವೋ ಅಂತಾ .... 

ಗೊಂದಲ ..... 

ನಾವು ನಮ್ಮ ಓದು ಮುಗಿದು..... 

ನಮ್ಮ - ನಮ್ಮದೂ ಅಂತ  ಬದುಕು ಕಟ್ಟಿ ಕೊಂಡ  ಮೇಲೆ... 

ನಾವಾಗಿ ಯಾವತ್ತೂ ಬೇಟಿಯಾಗಿಲ್ಲ .....  ಅಂತ ನನ್ನ ಮನಸ್ಸು ಹೇಳ್ತಿದೆ 

ನಾವು ಬೇಟಿಯಗಿದ್ದು .... 

ನೀನು ಒಬ್ಬಳ ಗಂಡನಾಗಿ , ಮಕ್ಕಳ ಅಪ್ಪನಾಗಿ, ಅಮ್ಮನ ಮಗನಾಗಿ ....

ಒಂದು  MNC  ಯಲ್ಲಿ ಬಾಸ್ ಆಗಿ .....  

ಹಾಗೆ ನಾನು ಒಬ್ಬನ  ಹೆಂಡತಿಯಾಗಿ , ಮಕ್ಕಳ ಅಮ್ಮನಾಗಿ .... 

ಮಗಳು ಸೊಸೆ  ನಾದಿನಿ ಅತ್ತಿಗೆ ಪಾತ್ರ ಗಳ ಸುತ್ತ ಕಳೆದು ಹೋಗಿ, 

ನನ್ನ ಕೆಲಸದ  ಒತ್ತಡದ  ಬಗ್ಗೆ ಹೀಗೆ ಮಾತಾಡಿದ್ದಿವಿ..... 

ಯಾವತ್ತೂ  ಹೇಳ ಬೇಕೆಂದಿದ್ದದ್ದನ್ನ  ಹೇಳಲೇ ಬೇಕು ಅಂತಾ 

ಅಂದು ಕೊಂಡಾಗೆಲ್ಲ..... 

 ಕಳೆದು ಕೊಂಡದ್ದನ್ನ .....  ಮತ್ತೆ ನೆನಪಿಸುವದು ಬೇಡ 

ಅಂತ ಸುಮ್ಮನಾಗುತ್ತಿದ್ದೆ ... 

ಆದ್ರು ನಿನ್ನೆದುರು ಹೇಳಲು .... ಕೊನೆಗೂ ಆಗಲೇ ಇಲ್ಲ ..... 

ನಿನ್ನ ಚಿನ್ನದ ಪದಕದ ಓದಿಗೆ.....  ಪಟ್ಟಣದ  ಕೆಲಸ ಕರೆದು ಮಣೆ  ಹಾಕಿತು .... 

ಅವಕಾಶದ ಬಾಗಿಲು ತೆರೆದು ಕೊಂಡಿತು .... 

ಸಿಕ್ಕ ಅವಕಾಶ ವನ್ನ  ನೀನು ಉಪಯೋಗಿಸಿ ಕೊಂಡೆ .....

ಅದಿಕ್ಕೆ ನೀನು ಎತ್ತರದ ಹುದ್ದೆ ಯಲ್ಲಿದ್ದಿಯ..... 

ಒಳ್ಳೆಯ ಹುಡುಗಿಯ ಜೊತೆ ಮದುವೆಯೂ ಆಯಿತು... 

ನಿನಗೀಗ ಯಾವ ಕೊರತೆಯೂ ಇಲ್ಲ  

ಇದನ್ನೆಲ್ಲ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ .... 

ಎಲ್ಲಾರಿ ಗಿಂತ ಹೆಚ್ಚು ಸಂಭ್ರಮ ಪಟ್ಟಿದ್ದು ನಿನ್ನ "ಅಣ್ಣ " 

ನಿನಗೆ ಅಪ್ಪ ನ ಕೊರತೆ ಕಾಡದಿರಲಿ ಅಂತಾ ತನ್ನ ಸುಖ ವನ್ನ ಪಕ್ಕಕ್ಕಿಟ್ಟು .. 

ನಿಮ್ಮನ್ನೆಲ್ಲ ಮಕ್ಕ ಳಂತೆ  ಬೆಳೆಸಿದ ಅಣ್ಣ ...... 

ಅಣ್ಣನಲ್ಲಿ ಎಲ್ಲ ಇಲ್ಲ ವನ್ನೇ ಹುಡುಕಿದೆ ಯಾಕೆ ?

ಯಾಕೆ  ಅಮ್ಮ ನಲ್ಲಿ ಗೊಂದಲದ ಬೀಜ ಬಿತ್ತಿದೆ ..... 

ಫೋನ್ ಮಾಡಿದಾಗೆಲ್ಲ " ಅವತ್ತೇ ಹಣ ಕಳಿಸಿದ್ದೇನಲ್ಲ 

ಇನ್ನು ತೋಟದ ಕೆಲಸ ಅಣ್ಣ ಮಾಡಿಸಿಲ್ಲವ "

" ಅಕ್ಕ ಅಣ್ಣ ಮಾಡುತ್ತಿರೋದು ನೋಡು ಏನು ಕೊರತೆ ಮಾಡಿದ್ದೀನಿ ಅಂತ 

ಹೀಗೆ ಮಾಡುತ್ತಾನೆ ಗೊತ್ತಿಲ್ಲ "

ಅಮ್ಮ ಅಕ್ಕಂದಿರೆದುರು ಅಣ್ಣ ನನ್ನ ವಿಲನ್ ಮಾಡಿ ಬಿಟ್ಟೆ...... 

ಒಮ್ಮೆ ಮನೆಗೆ ಬಂದು ೧೫ ದಿನ ಇದ್ದು ಕೆಲಸ ಮಾಡಿಸಿದ್ದರೆ ನಿನಗೆ 

ಗೊತ್ತಾಗುತ್ತಿತ್ತು ....  ಪರಿಸ್ತಿತಿ .. 

ಕೆಲಸ ದವರ ಮನೆಗೆ ದಿನಾಲೂ ಅಲೆಯೋದು ....... 

ಕೊನೆಗೂ ತನಗಾದ ವಯಸ್ಸಿನ ಪರಿವೆಯೇ ಇಲ್ಲದೆ .... 

ಟೈಮ್ ಇಲ್ಲದೆ  ಕೆಲಸ ಮಾಡೋದು ....

ಹೊತ್ತು ಗೊತ್ತಿಲ್ಲದ ಊಟ ...... 

ಬೆನ್ನು ಬಾಗಿದ ಅಮ್ಮ  ನಿನ್ನ ಮಾತು ಕೇಳಿಕೊಂಡು 

ನೀನು ವದರಿದ್ದೆ ಬದ್ದ ಅಂದು ಕೊಂಡು... 

ಒಂಟಿ ಅಣ್ಣನ ಇದ್ದ ಬದ್ದ ನೆಮ್ಮದಿಗೂ ಕಲ್ಲು ಬಿದ್ದು ...... 

ಮೌನಿ  ಆದ......... ತಾನೆ ಬೆಳೆಸಿದ ತಂಗಿ - ತಮ್ಮಂದಿರ  ಮೇಲಿನ  ಮಮತೆ 

.....  ದೂರ ಹೋಯಿತು 

ಆತನ ಬೇಸರ ನಿಮಗೆ ಗೊತ್ತಾಗಲೇ ಇಲ್ಲ .............. 

ನಿನಗೆ ಅಮ್ಮ ಆಸ್ಪತ್ರೆ  ಸೇರಿದಾಗಲು ಅತ್ತ ಹೋಗಲು  

ನಿನ್ನ ಕೆಲಸ ನಿನ್ನ  ಬಿಡಲಿಲ್ಲ ..... 

ವಾರಗಳು ಅಲ್ಲೇ ಕಳೆದು ಮನೆ ಆಸ್ಪತ್ರೆ  ಇದೆಲ್ಲ ಅವನೇ ಮಾಡಿದ 

( ನೀನೆ ಹೇಳಿದಂತೆ ನಿನ್ನ ಹಣದಲ್ಲಿ )

ಅವತ್ತು ಅಣ್ಣ ಮನೆಗೆ  ಹೋಗಿ ವಾಪಸ್ಸಾಗುವ ಮುನ್ನ ಅಮ್ಮ  ಪ್ರಾಣ ಬಿಟ್ಟಿದ್ದಳು ..... 

ಆ ಸಾವಿಗೂ ಅವನನ್ನೇ ಕಾರಣ ಮಾಡಿದ್ದೂ  ಎಷ್ಟು ಸರಿ ?

"ಹುಟ್ಟಿದವನಿಗೆ ಸಾವು ಖಂಡಿತ "

ಇದು ನಿನ್ನೊಬ್ಬನ ಕಥೆ ಅಲ್ಲಾ  ಸುಂದ್ರ ,

ತನ್ನ ತನ ವನ್ನು ಬಿಟ್ಟು ಕುಟುಂಬದ ಏಳಿಗೆಗೆ .....  

ಬದುಕಿದ ಎಲ್ಲ ಅಣ್ಣ ಅಕ್ಕಂದಿರ 

ಇಂದಿನ ಪರಿಸ್ತಿತಿ ..... 

ದಿನವು ಜೊತೆಗಿದ್ದು  ಬೇಕು ಬೇಡ ಗಳನ್ನೆಲ್ಲ ನೋಡಿ ಕೊಂಡವರಿಗಿಂತ 

ದೂರದಲ್ಲಿದ್ದು ಬಣ್ಣದ ಮಾತಾಡಿದ ಮಕ್ಕಳನ್ನೇ ನಂಬುವ..... 

ಅಮ್ಮಂದಿರ ಕಥೆ............ 

ಯಾಕೆ ನಿನಗಿದೆಲ್ಲ ಗೊತ್ತೇ ಆಗಲಿಲ್ಲವ ?

ಹಣ ನಮ್ಮನ್ನ ಕಟ್ಟಿ ಹಾಕುತ್ತಿದೆಯ ...... ಅಥವಾ ಪರಿಸ್ಥಿತಿ ಯಾ ?

ನಿನ್ನ ಕಾರಣ ನನಗೆ ಬೇಕಿಲ್ಲ ..... 

ಒಮ್ಮೆ ಹೋಗಿ ಮಾತಾಡಿಸು ಅದೇ ತೋಟದಲ್ಲಿ ಅಣ್ಣ ನಿನಗೆ ಸಿಗಬಹುದು ..... 

--ಅನು 

Sunday 18 August 2013

ಅಪ್ಪೆಮರನ ಕೊಡ್ಳು ಹಾಗೂ ಉದ್ದ ಲಂಗ


 ಖಾಲಿ  ಕುಳಿತಾಗ  ಬಾಲ್ಯದತ್ತ ಓಡುವ  ಮನಸು ,

ಎಲ್ಲೋ ಕಳೆದು ಹೋದ ಬಾವ ..... 

ಬಾಲ್ಯ ಮರುಕಳಿಸುವಂತಿದ್ದರೆ  ಇವೆಲ್ಲ ಮಾಡಬಾರದು  ಇವನ್ನ ಮಾಡಬೇಕು  

ಅಂತ ಪಟ್ಟಿ ಮಾಡಿ ಬಿಡುತ್ತಿದ್ದೆನೇನೂ 

ಬಾಲ್ಯ  ದತ್ತ ತಿರುಗಿದಾಗೆಲ್ಲ  ನೆನಪಾಗುವದು ...............  

ಉದ್ದ ಲಂಗ, ಅಪ್ಪೆಮರನ ಕೊಡ್ಳು (ಹಳ್ಳ )...... 

ಕೂಡು ಕುಟುಂಬದಲ್ಲಿ ಬೆಳೆದ ನಮಗೆ  

ವರ್ಷಕ್ಕೆ  ಎರಡು ಬಾರಿ  ಬಟ್ಟೆ ಬರುತ್ತಿತ್ತು .. (ಟಾಕಿ )

ಇಗಸ್ಟೇ  ಹೊಲಿಗೆ ಕಲಿಯುತ್ತಿರುವ ಅತ್ತೆಯಂದಿರು   ಎಲ್ಲರಿಗೂ  ಡ್ರೆಸ್  

ಹೊಲಿಯುವ ಜವಾಬ್ದಾರಿ ಹೊತ್ತಿರುತ್ತಿದ್ದರು .... 

ಅವರವರ  ಎತ್ತರಕ್ಕೆ ಅಗಲಕ್ಕೆ ತಕ್ಕಂತೆ  ಹೊಲಿಯುವ  ನಿಯಮವನ್ನ 

ಎಲ್ಲಿಗೋ ತೂರಿ .... 

ಬಟ್ಟೆಯನ್ನ ಅಳತೆ ಮಾಡಿ ಇವರದ್ದು ಇಸ್ಟು ಪಾಲು ಅಂತ ತೆಗೆದಿಟ್ಟು ....  

ಆಮೇಲೆ  ಹೊಲಿಯುವ  ಕೆಲಸ ಶುರು...........   ನನ್ನಂತಹ ಕುಳ್ಳಿಗೆ ಉದ್ದ 

ಲಂಗ , ಎತ್ತರದ  ದೊಡ್ಡಪ್ಪನ ಮಗಳಿಗೆ ಗಿಡ್ಡ ... 

ಇನ್ನೊಂದು ವಿಚಾರ ಏನೆಂದರೆ .... ನಮ್ಮೂರಿನ (ಪೇಟೆಯ ) ಬಟ್ಟೆ ಅಂಗಡಿ 

ಅಲ್ಲಿಂದ ಕೇವಲ ನಮ್ಮದೇ ೬-೮ ಮನೆಯವರು 

ಬಟ್ಟೆ  ತೆಗೆದು ಕೊಳ್ಳುತ್ತಿದ್ದರೆನೋ  ಅನ್ನುವದು  ನನ್ನ ಅನುಮಾನ ......  

ಯಾವತ್ತು ಅಂಗಡಿಯ ಬಾಗಿಲನ್ನ  ಮುಚ್ಚಿ  ಹೋಗ 

ಬಹುದು ಅಂತ ಪ್ರತಿ ಬಾರಿಯೂ ನಾನು ಮತ್ತು ಅನು 

ಮಾತಾಡಿದ್ದು ಸುಳ್ಳಲ್ಲ ....... 

ಅಪ್ಪ -ದೊಡ್ಡಪ್ಪ  ಪೇಟೆಗೆ  ಹೋದಾಗೆಲ್ಲ  

ಮಧ್ಯಾಹ್ನ  ಕಡ್ಲೆ ಭಟ್ರ  ಖಾನಾವಳಿ ಯಲ್ಲಿ ಊಟ ಮಾಡಿ  

ಚಿತ್ರಿಗಿ ಬಟ್ಟರ  ಬಟ್ಟೆ ಅಂಗಡಿ ಯಲ್ಲಿ ನಿದ್ದೆ  ಮಾಡಿಯೇ ಬರುತ್ತಿದ್ದದ್ದು ........  

( ಅಂಗಡಿ ಯಲ್ಲಿ ಇವರನ್ನ  ಕೂಡಿ ಹಾಕಿ ಊಟಕ್ಕೆ ಹೋದ ಭಟ್ಟರು  ೩ ಘಂಟೆಗೆ 

ಬರುವ ಹೊತ್ತಿಗೆ ಒಳ್ಳೆ ನಿದ್ದೆ ಮುಗಿದಿರುತ್ತಿತ್ತು )

ದಿನ ಕಳೆದಂತೆ  ಅತ್ತೆಯ ಮದುವೆಯೂ ಆಯಿತು........  ಮನೆ ಪಾಲೂ ಆಯಿತು ...... 

ಇ ಸಲ ಅಪ್ಪ  ನಮಗೆ ಮೊದಲು ಬಟ್ಟೆ ತಂದಾಗ .... ಎಲ್ಲೋ ಅನುಗೆ ಇನ್ನು 

ಬಂದಿಲ್ಲ ನನಗೆ ಮೊದಲು ಹೊಸ ಲಂಗ 

ಅಂತ ಖುಷಿ ಯಾದರೂ  ಆ ಖುಷಿ  ತುಂಬಾ ದಿನ ಉಳಿಯಲಿಲ್ಲ ..... 

ನಮಗೆ ತಂದು ಎರಡು ವರದ ನಂತರ  ದೊಡ್ಡಪ್ಪ ಬಟ್ಟೆ ತಂದರು  

ಹೊಸ ಡಿಸಾಯನ್ ದು .... 

ಆರು ತಿಂಗಳ ಮೇಲೆ ನಮಗೆ ಅಂತದ್ದೇ ಬಂತು ಅವಾಗ 

ಹಳೆಯದು  ಅನ್ನಿಸಿತ್ತು ..... ಪ್ರತಿ ಬಾರಿಯೂ ಹೀಗೆ 

ಕೊನೆಗೂ ತಿಳಿದ ಕಾರಣ ಏನೆಂದರೆ  ಅಲ್ಲಿ ಬಹುಷಃ ಬಟ್ಟೆ ಖರೀದಿ 

ಮಾಡುತ್ತಿದ್ದದ್ದು .....  ನಮ್ಮೆರಡೇ  ಮನೆ..... 

ಎರಡು ಮನೆಯಿಂದ ಒಂದು ಟಾಖಿ  ಖಾಲಿ ಆಗುತ್ತಿತ್ತು ........... 

ಒಂದು ಖಾಲಿ ಅದ ಮೇಲೆ ಇನ್ನೋದು ತರುವ ಸ್ವಭಾವ ...... ಭಟ್ಟರದ್ದು .... 

ಇಲ್ಲಿ ವ್ಯಾಪಾರ ಇಲ್ಲದೆ ಯಾಕೆ ಇಲ್ಲಿದ್ದಾರೆ ಅಂತಾ  ಕೇಳಿದ್ದಕ್ಕೆ ನಮ್ಮದು 

ಊರಲ್ಲಿ  ದೊಡ್ಡ ಷೋ ರೂಂ  ಇದೆ ಅನ್ನುವ  ಸಿದ್ದ 

ಉತ್ತರ............  

ಕೆಲವೇ ಮನೆಯವರು  ಹೋಗುತ್ತಿದ್ದದ್ದ ರಿಂದ  ಮನೆಯ ಎಲ್ಲ ಹಬ್ಬ ಹರಿ 

ದಿನಕ್ಕೂ  ಅವರನ್ನು ಕರೆಯುವ ಪರಿ ಪಾಟ 

ಒಮ್ಮೆ ಅವರ     ಷೋ ರೂಂ  ನೋಡಿದಾಗಲೇ ಗೊತ್ತಾಗಿದ್ದು  ಅಲ್ಲಿ ಯವರಿಗೆ 

ಕೊಡುತ್ತಿದ್ದದ್ದು  ಇದೆ ಉತ್ತರ............ 

ಇನ್ನೊಂದು  ಹೇಳಲೇ ಬೇಕಾದದ್ದು  ಅಪ್ಪೆ ಮರನ  ಕೊಡ್ಳು ..... 

ಪ್ರತೀ ಮಳೆಗಾಲಕ್ಕೆ ಅಪ್ಪ ಬಣ್ಣದ ಕೊಪ್ಪೆ ತಂದು ಕೊಡುತ್ತಿದ್ದರು 

ಛತ್ರಿ ನಮ್ಮೂರಿನ ಗಾಳಿ  ಮಳೆಗೆ  ಒಂದು ತಿಂಗಳೂ 

ಉಳಿಯುತ್ತಿರಲಿಲ್ಲ ...... 

ಶಾಲೆಯಲ್ಲಿ  ಅಕ್ಕೋರು ಬಿಟ್ಟು (ಟೀಚರ್ )ಎಲ್ಲರಿಗೂ  ಕೊಪ್ಪೆಯೇ ಆಗಿದ್ದರಿಂದ 

ಬೇಜಾರೇನು ಇರಲಿಲ್ಲ ............. 

ಮಳೆ ಗಾಲದಲ್ಲಿ ತುಂಬಿ ಹರಿಯುವ  ಕೊಡ್ಳು  

ಉಳಿದ ದಿನಗಳಲ್ಲಿ ಒರತೆ ನೀರು ಇರುತ್ತಿತ್ತು ..... 

ನನ್ನ ನಾಲ್ಕನೆ ಕ್ಲಾಸ್ ವರೆಗೂ, ಜೋರಾಗಿ ಮಳೆ ಬಂದಾಗ  ನನ್ನ ಸೊಂಟದ 

ವರೆಗೂ ಬರುತ್ತಿದ್ದ ನೀರು ..... 

ನಂತರ ಒಮ್ಮೆಯೂ ಅಸ್ಟೊಂದು ಬರಲಿಲ್ಲಾ ಯಾಕೇ ಅಂತಾ .... 

ಗೊತ್ತೇ ಆಗಲಿಲ್ಲ 

ದಿನವೂ ಬರೆಯುತ್ತಿದ್ದ ಒಳ್ಳೇ ಕೆಲಸದ ಪಟ್ಟಿಯಲ್ಲಿ ..... 

ವಾರಕ್ಕೆ ಒಮ್ಮೆಯಾದರೂ ... 

" ನಾನು ಕುರುಡನನ್ನು ರಸ್ತೆ ದಾಟಿಸಿದೆನು " ಅಂತ ಬರೆಯುತ್ತಿದ್ದೆ ,ಅಸಲು 

ನಮ್ಮೂರಿನಲ್ಲಿ ಯಾರೋಬ್ಬರು 

ಕುರುಡರು  ಇರಲಿಲ್ಲ ......  

ಕೇವಲ ೧೪ ಮನೆಗಳಿದ್ದ ನಮ್ಮ ಊರಿನಲ್ಲೇ ಉಳಿದು ,

ಊರವರೆ  ಆಗಿದ್ದ  ಅಕ್ಕೋರು 

ಗೊತ್ತಿದ್ದೂ ಗೊತ್ತಿದ್ದೂ ರೈಟ್ ಹಾಕಿ ಸಹಿ ಮಾಡುತ್ತಿದ್ದದ್ದು  

ಯಾಕೆ ?  ಹೀಗೆ  ಇನ್ನೂ  ಅರ್ಥವೇ  ಆಗದ , 

ಆಗೀಗ  ಕಾಡುವ ......  ವಿಚಾರ ಗಳು ಇನ್ನು ಇವೆ   

Thursday 4 July 2013

ಎಡ ಬಿಡಂಗಿ

ಅವತ್ತು ಕಾಡಿದ ಭಾವ ಇವತ್ತು ನನ್ನಲ್ಲಿ ಭದ್ರ ವಾಗಿದೆ .....


ದಶಕ ಗಳ ಹಿಂದೆ ಮದುವೆಯಾಗಿ ಹೊರಟಾಗ ಅಮ್ಮನಲ್ಲಿ ಸಂತ್ರಪ್ತಿ ...


"ಅಂತು ಮಗಳಿಗೆ ಒಳ್ಳೆಯ ಹುಡುಗನ್ನ ಹುಡುಕಿದೆ " ಯಾರೋ ಆಡಿದ ಮಾತು ... ..


ಅಮ್ಮನಿಗೂ ಇದೆ ಬೇಕಿತ್ತಾ ...?


ಪ್ರಶ್ನೆ ಉತ್ತರ ಸಿಗದೇ ನನ್ನೊಳಗೇ ... ಉಳಿದ ಪ್ರಶ್ನೆ ಗಳೊಂದಿಗೆ ಕಣ್ಣಮುಚ್ಚೆ ಆಡುತ್ತಾ ....


ಅಲ್ಲಲ್ಲೇ ಸುತ್ತಿ ಮತ್ತೆ ಗೋಜಲಾಗುತ್ತಿದೆ ..........


ಒಂಟಿತನಕ್ಕೆ ಉತ್ತರ .......


" ನಾನಲ್ಲಿಂದ ವದರಿದ್ದೆ ಬದ್ದ ".... .... ಸತ್ಯ ಸುಳ್ಳುಗಳ ತಾಕಲಾಟಕ್ಕೆ .....


ಅಲ್ಲೆಲ್ಲೋ ಕುಳಿತ ಅಮ್ಮನಿಗೆ ನನ್ನ ಒಂಟಿತನದ ಬಿಸಿ ತಾಗ ಬಾರದೆಂದು .....


ಮಾತಿನಲ್ಲಿ ನಸುನಗುವಿನ ಮುಸುಕೆಳೆಯುತ್ತೇನೆ ................


ಮುಖ ಕಾಣದ್ದಕ್ಕೆ ..... ಅಂದಿನ ಮಾತು ಮುಗಿದರೆ ...


ನನಗೆ ಯುದ್ದ ಗೆದ್ದ ಭಾವ ........


ನನ್ನದೇ ಸ್ನೇಹಿತರು .... ಓಡಾಡಿದ ತೋಟ, ಕಾಡು ತಿಂದ ಕಾಡು ಹಣ್ಣು ,


ಓದಿದ ಪುಸ್ತಕ ..... ನನ್ನದೇ ಮಾತ್ರ ಭಾಷೆಯ ಜನ.....


ಇದೆಲ್ಲ ಒಂದು ಹಂತದ ವರೆಗೆ ..... ....


ಅಪ್ಪನ ವತ್ತಾಯಕ್ಕೆ ..... ತಿರುಗಿ ಮಾತಾಡಲಾರದೆ .... ಒಪ್ಪಿಕೊಂಡ ಓದು ...


ಇಲ್ಲ ..... ಬೇಕಿರಲಿಲ್ಲ ನನಗೆ .... ಲಕ್ಷ ಲಕ್ಷ ಸಂಪಾದನೆ ......


.... ನನ್ನಂತಹ ಎಲ್ಲಾ ಎಲ್ಲಾ ಹುಡುಗಿಯರಂತೆ .... ನಾನು ನನ್ನಷ್ಟಕ್ಕೆ ಹಾಡಿಕೊಂಡು ....


"ಟವೆಲ್ ಇಟ್ಟು ಕೊಂಡು ಓದುವ ಕಾದಂಬರಿ ಓದಿಕೊಂಡು".....


ನನ್ನದೇ ಪುಟ್ಟ ಪ್ರಪಂಚದಲ್ಲಿ ಬದುಕಿ ಬಿಡುತ್ತಿದ್ದೆ.... ...


ಪರಿಚಿತರಿಲ್ಲದ ಊರು .... ಆಸಕ್ತಿ ಇಲ್ಲದ ಕೂಡಿ ಕಳೆಯುವ ಓದು ....


ನನ್ನಂತಹ ಭಾವ ಜೀವಿಗಲ್ಲ .....


ಅಮ್ಮ ನೆದುರು ಬಿಕ್ಕಿ ಬಿಕ್ಕಿ ಅತ್ತಿದ್ದೆ...


ಕೊನೆಗೂ ಎಲ್ಲರೆದುರು ಹೇಳಲಾಗದೆ .....


ಒಂಟಿಯಾಗಿ ನನ್ನೊಳಗೆ ಬದುಕಿ ಬಿಡುವ ....


ನನ್ನ ಆಸೆಗಳನ್ನ .... ನನ್ನವೇ ಮಾಡಿ ಕೊಂಡು.....


ಕನಸು ಗಳನ್ನ ಕಟ್ಟಿಟ್ಟು ....


ಭಾವನೆ ಗಳಿಲ್ಲದ ಭವಿತವ್ಯಕ್ಕೆ ನಾಂದಿಯಿಟ್ಟೆ ,


ನನಗಿಂತ ದೊಡ್ಡ....! ಬ್ಯಾಗ್ ಗಳೊಂದಿಗೆ ....


ಹೊರಟಾಗ .... ಆಗಿನ್ನೂ ಕನಸು ಕಾಣುವ ಹರಯ ......


ಅಪ್ಪನಿಸ್ಟದ ಓದು.... ಅಪ್ಪನಿಗಾಗಿ ಓದಿದೆ .....


ಕೇಲಸ ..... ಬೇಡ ವೆಂದರೂ ಕರೆದು ಕೊಟ್ಟರು .....


ಮೂರ್ನಾಲ್ಕು ವರ್ಷಕ್ಕೆಲ್ಲ .... ಕೂದಲೆಲ್ಲ ಹಣ್ಣಾಗಿ , ಕಣ್ಣು ಮಂದವಾಗಿ,


ಕನ್ನಡಕ ಮತ್ತೆ ಕೂದಲಿನ ಬಣ್ಣ ಒಟ್ಟೊಟ್ಟಿಗೆ .... ನನ್ನ ಸ್ನೇಹಿತರಾದವು .....


ರಾಜಣ್ಣ ನ ಲೈಬ್ರರಿ ಯನ್ನ .... ಯಾರಿಗೋ ಮಾರಾಟ ಮಾಡಿ ಹೋದ ...


ಅನ್ನುವ ಸುದ್ದಿಯನ್ನೂ ಅಮ್ಮ, ನಗುವಿ ನೋಟ್ಟಿಗೆ ಹೇಳಿದಾಗ .....


ನೀವು ಎಲ್ಲಾ ಊರು ಬಿಟ್ಟ ಮೇಲೆ .... ಯಾರು ಓದುವರಿಲ್ಲದಂತಾಗಿ...


ಪುರೋಹಿತ್ಯ ಮಾಡುವದೇ .... ಆದಾಯದ ಮೂಲ ಮಾಡಿಕೊಂಡ ರಾಜಣ್ಣ .....


(ವಾರಕ್ಕೆ ೪ ರೂಪಾಯಿ ಯಂತೆ ಒಂದು ಪುಸ್ತಕ ಕೊಡುತ್ತಿದ್ದ ರಾಜಣ್ಣ ....)


ಇವೆಲ್ಲ ಫೋನ್ ನಲ್ಲಿ ಅಮ್ಮ ಹೇಳಿದ್ದು ..... ಖುಷಿಯಿಂದಲ ?


ಗೊತ್ತಿಲ್ಲಾ !


ಒಮ್ಮೊಮ್ಮೆ ತುಂಬಾ ಭಾವುಕಳಾಗಿ .... ಕಣ್ತುಂಬಿ ಕೊಂಡಿದ್ದೇನೆ ....


ನನ್ನ ಎಡ ಬಿಡಂಗಿ ಬದುಕಿಗೆ .....


ಎಲ್ಲಿಯ ವರೇಗೆ ಹೀಗೆ ಬೇರೆಯವರಿಗಾಗಿ ಬದುಕಲಿ ಅಂತೆಲ್ಲಾ ...


ನನ್ನ ಕಂಡಿಶನ್ನಿನಂತೆ ಮದುವೆ ಯಾದ ಮೇಲೆ ಕೆಲಸ ಮಾಡಲ್ಲ ....


ಅಂದು ಕೊಂಡವನು ..... ದಿನವಿಡೀ ಕಾಡುವ ಒಂಟಿತನಕ್ಕೆ ....


ಹೆದರಿ ... ಕೆಲಸಕ್ಕೆ ಸೇರಿಕೊಂಡೆ ....


ಪುರಸೋತ್ತಿದ್ದಾಗ ಓದಬೇಕು ಅಂತ ತಂದಿಟ್ಟ ಪುಸ್ತಕಗಳೆಲ್ಲಾ


ಮನೆ ಬದಲಿಸುವಾಗ ..... ಎಲ್ಲೆಲ್ಲೋ .... ಸೇರಿ ಹೋದವು .....


ಬೇಕಾದಾಗ ಸಿಗಲಿಲ್ಲಾ , ಸಿಕ್ಕಾಗ ಓದಲಾಗಲಿಲ್ಲ .....


ಮನಸ್ಸಿಗೆ ಬಂದಾಗ .... ಮನೆಯ ಅಂಗಳದಲ್ಲಿ ಕುಳಿತು .....


ಕತೆ ಹೇಳಬೇಕು ..... ಅಂತೆಲ್ಲ ಹೋಗಿದ್ದೆ .....


ಆದರೆ , ಅಲ್ಲಿ ನಾ ಪರಕೀಯಳು, ಇಲ್ಲಿ ನಾ ಹೊರಗಿನವಳು .....


ಊರೆಲ್ಲಾ ಬದಲಾಗಿದೆ ..... ನಾನೋದಿದ ಶಾಲೆ ಮುಚ್ಚಿ ವರ್ಷ ಕಳೆದಿದೆ .....


ಮಕ್ಕಳೆಲ್ಲಾ ಪೇಟೆ ಶಾಲೆಗೇ ಹೊರಟಿದ್ದಾರೆ .....


ಬಾರೋ ನೇರಳೆ ಹಣ್ಣಿದೆಯ ನೋಡಿ ಬರೋಣ ಎಂದಿದ್ದಕ್ಕೆ ....


ನನ್ನಣ್ಣನ ಮಗ ..... " ನಾಳೆ ಸ್ಕೂಲ್ ಗೆ ಹೋಗಬೇಕು ನಾಲಿಗೆ ಎಲ್ಲಾ ನೀಲಿ ಯಾಗುತ್ತೆ "


ಅಂದು ಒಳಗಿಂದ ಇನ್ನೇನೋ .... ಚಿಪ್ಸ್ ತಂದ ಬೇಕಾ ಎನ್ನುತ್ತಾ ?


ಅಪ್ಪ ಇದಕ್ಕೇನ ನನ್ನ ಮಾಮೂಲು ಹುಡುಗಿಯಂತೆ ಇಲ್ಲೇ ಓದಲು ಬಿಡದೆ ಹೋದದ್ದು .....


ಅನ್ನಿಸಿತು ...


ನನ್ನ ಹಾಸ್ಟೆಲ್ ಓದು ..... ಭಾವನೆ ಗಳನ್ನ ಕಿತ್ತು ಕೊಂಡದ್ದು ....



ಅಧುನಿಕರನ್ನಾಗಿಸುವ .... ಹಟಕ್ಕೆ ಬಿದ್ದ ಅಪ್ಪ .....


ತಪ್ಪು ಮಾಡಿಲ್ಲ ....


ತನಗೆ ಅಂದು ಅವಕಾಶ ವಿಲ್ಲದ ತನ್ನಿಸ್ಟದ ಓದಿಗೆ ನಮ್ಮ .... ಸೇರಿಸಿದ್ದ .....


ನಾನು ಹಾಗೆ ಮಾಡಲ ?


ನನ್ನಾಸೆಯ ಓದಿಗೆ ನನ್ನ ಮಕ್ಕಳನ್ನ ಸೇರಿಸಲಾ ?


ಕೊನೆಯೇ ಇಲ್ಲದ ವಿಚಾರ ಗಳು ......


ನನ್ನ ಗೆಳತಿಯರೆಲ್ಲಾ ಆಗಾಗ ಒಟ್ಟಿಗೆ ಸೇರಿ ....


ಅಲ್ಲಿಗೆ ಹೋಗಿದ್ದು , ಇಲ್ಲಿ ತಿಂದದ್ದು ಅಂತೆಲ್ಲಾ


ಫೇಸ್ ಬುಕ್ ನಲ್ಲಿ ಫೋಟೋ ಅಂಟಿಸಿ ದಾಗೆಲ್ಲ ....


ನನ್ನ ಧಾವಂತದ ಬದುಕಲ್ಲಿ ಕಳೆದು ಹೋದದ್ದು ....


ಮತ್ತಷ್ಟು ಕಾಡಿ ಮೌನಿ ಯಾಗುತ್ತಿನಿ .....


ಈಗ ಇದೆಲ್ಲಾ ಯಾರಲ್ಲಿ ಹೇಳಲಿ ಗೊತ್ತಾಗದೇ .....


ಕೂಡಿ ಕಳೆಯುವ ಲೆಕ್ಕದ ಕೆಲಸದಲ್ಲಿ ತಪ್ಪು ಮಾಡುತ್ತೀನಿ .... ನನಗಲ್ಲ


ಕೇಲಸ ಇ ತಿಂಗಳ ಕೊನೆಗೆ ಬಿಟ್ಟು ಬಿಡುತ್ತೀನಿ....


ಅಂದು ಕೊಂಡು ಲೆಕ್ಕ ಸರಿ ಮಾಡಿ .... ಹೊರಡುತ್ತೀನಿ


ಬಿಟ್ಟು ಬಿಡಬೇಕು ಎಂದು ಕೊಂದ ಕೆಲಸ .... ಇನ್ನು ಬಿಟ್ಟಿಲ್ಲ


ಗಂಡ ಆಫೀಸ್ ಗೆ ಮಕ್ಕಳು ಅವರವರ ಓದಿಗೆ ಹೊರಟ ಮರು ಕ್ಷಣ


ಕಾಡುವ ಒಂಟಿತನ ದಿಂದ ಹೊರಗೆ ಹೋಗಲು ಕೆಲಸಕ್ಕೆ ಹೊರಡುತ್ತೇನೆ ...


ಓದದೆ ಉಳಿದ ಪುಸ್ತಕ ಓದಲು ನನ್ನಾಸೆಯಂತೆ .....


ತೋಟ ಸುತ್ತಲು .....


ಮತ್ತೆ ಕೆಲಸ ಬಿಡುವ ವಿಚಾರ ಮಾಡುತ್ತೇನೆ................

Tuesday 2 April 2013

ನಾನು



ವಾಸ್ತವದಲಿ ತತ್ತರಗೊಂಡ



ಕನಸುಗಳಿಗೆ ಸಾಂತ್ವನ



ಹೇಳುತ್ತಿದ್ದ ದಿನಗಳು



ಇನ್ನು ನನ್ನೆದುರಿಲ್ಲ



ಕನಸುಗಳೇ ನನಗೇ



ಸಾಂತ್ವನ ಹೇಳುತ್ತಿವೆ



ನನ್ನೆದುರಿನ ವಾಸ್ತವದಲಿ



ತತ್ತರ ಗೊಂಡಿದ್ದು ಇಂದು



'ವಾಸ್ತವ' ಮತ್ತೆ 'ಕನಸು' ಗಳಲ್ಲ



"ನಾನು "..............

Friday 1 March 2013

ಆಲಾಪಿನಿ

ಈಗ ನಾವು ಬರೆ ಪ್ರವಾಸಿಗರು ಮಾತ್ರ ....

ವರ್ಷಕ್ಕೊಮ್ಮೆ ಒಂದು ತಿಂಗಳು

ಕ್ಯಾಮರ ಹೆಗಲಿಗೇರಿಸಿ Q ನಲ್ಲಿ ನಿಂತು ಪಾಸ್ ಪಡೆದು ಅಂಡಲೆಯುವ ನಾವು

ನಿಮ್ಮೆಲ್ಲರಂತೆ ನಾವು ಬರೆ ಪ್ರವಾಸಿಗರು ,

ಇವತ್ತಿಗೂ ಅಜ್ಜಿ ಹೇಳಿದ್ದು ನೆನಪಿದೆ ...

ಹಾಳು ಇತಿಹಾಸ ಬೇಕೆನಿಸುತ್ತಿಲ್ಲ ...

ಇಲ್ಲಿಗೆ ಕಾಲಿಡ ಬಾರದು ಎಂದುಕೊಂಡಿದ್ದ ನಾನು ..

ಬಂದಿದ್ದೇನೆ ... ಇತಿಹಾಸದಲ್ಲಿ ನಮ್ಮವರ ಕುರುಹು ಎಲ್ಲಾದರೂ 

ಸಿಗಬಹುದೆಂದು..

ಕಾಲದ ಮರೆಯ ಕಸರತ್ತಿಗೆ ಕಯ್ ತಪ್ಪಿದ ಅರಮನೆ ...


ಕಾಲನ ತೆಕ್ಕೆಗೆ ಸೇರಿ ಹೋದ ನಾವು ....

ಒಂದೊಂದೇ ಹೆಜ್ಜೆ ಎತ್ತಿಡುತ್ತಾ ಭಾರವಾದ ಮನಸಿಗೆ ಸಮಾಧಾನ ಹೇಳುತ್ತಾ ....

ನಮ್ಮ ಮುತ್ತಾತ ಮೆರೆದ, ಮುತ್ತಜ್ಜಿ ನೊಂದ ಮನೆ ಇದು


ಒಂದು ಕಾಲದಲ್ಲಿ ನಮ್ಮದೇ ಮನೆ ...


ಇಂದು ಇಲ್ಲಿ ಕೇವಲ ಪ್ರವಾಸಿ ನಾವು .....

ಮುತ್ತಜ್ಜಿ ನೋಡಿದ ನೆನಪಿಲ್ಲ ಅಜ್ಜಿ ಯಾವತ್ತು ಹೇಳಿದಂತೆ ..


ಸುಂದರ ವಾಗಿದ್ದರು ... ಜಾಣ್ಮೆಯಾ ಹೆಂಗಸು ....


ಅಂದಿನ ಯುವರಾಜ ಮೆಚ್ಚಿ ಮದುವೆ ! ಯಾದಹುಡುಗಿ ...


( ಮದುವೆ ಆಗದವ ರೆಷ್ಟೋ )

ಅವರ ಜಾಣ್ಮೆ ಮದುವೆ ಆಗುವಂತೆ ಮಾಡಿದ್ದು .....


ಪಟ್ಟದ ರಾಣಿ ಅಲ್ಲ ಬಿಡಿ .....

ಒಳ ಅಡಿ ಇಟ್ಟಂತೆ .. ಮನ ಸ್ಮಶಾನ ಮೌನ ..


ಗೋಡೆಯ ಮೇಲಿನ ಸುಂದರ ಚಿತ್ರ ಅಲ್ಲಿಯ ಸಿಂಹಾಸನ ನೆಲದ ಹಾಸು ಕಲ್ಲು ..
ಚಿನ್ನ -ಬೆಳ್ಳಿಯ ವ್ವೆಭವ ... ನನ್ನ ಅತ್ತ ಸೆಳೆಯಲೇ ಇಲ್ಲ ....

ಮೂಲೆಯ ಕಂಭಕ್ಕೆಒರಗಿ ಒಂದು ಕ್ಷಣ ನನ್ನ ಮರೆಯುವಾಸೆ ...


ನನ್ನವನಿಗೆ ಹೇಳಿದೆ ...." ಕುಳಿತುಬಿಡು "


ಆತ ಮುಂದೆ ಸಾಗಿದ .....ವಿಚಾರಕ್ಕೆ ಬಿದ್ದೆ ...

ಇದೇ ಬಾಗಿಲಿಂದ ....

ಎದುರಾಡಿದ ಮನೆಯ ಹೆಣ್ಣು ಮಕ್ಕಳನ್ನ ಎಳೆ ತಂದಿರ ಬಹುದ ?

ಜೋರಾಗಿ ಕಿರುಚಿರ ಬೇಕು ....

ಅದಕ್ಕೆ.. ಇ ಗೋಡೆ,ಕಂಭ .... ಎಲ್ಲ ಇವತ್ತು ಸಾಕ್ಷಿ ಹೇಳ ಬಹುದಾ

ಎಷ್ಟು ಜನ ಅಮಾಯಕ ಹುಡುಗಿಯರ ಶಾಪ ಇರಬಹುದು ...

ಕಣ್ಣಿರು ... ಹೆತ್ತವರ ಬದುಕಿದ್ದು ಸತ್ತಂತ ಭಾವ...

"ಪುಣ್ಯ ನಮ್ಮ ಮಕ್ಕಳಿಗೆ ದುಡಿದು ತಿನ್ನುವ ದಾರಿ ತೋರಿಸಿದ್ದಕ್ಕೆ "

ಅಂತ ಅಜ್ಜಿ ಊರ ದೇವರ ಮುಂದೆ ಹೇಳಿ ನಮಸ್ಕರಿಸಿದ್ದು ನೋಡಿದ್ದೇನೆ ..

ಕಾರಣ ವಿಲ್ಲದೆ ,ಯಾರದೋ ತಪ್ಪಿಗೆ ನೇಣು ಗಂಭ ಏರಿದವರ..

ಅರಮನೆಯ ಸೇವೆಗೆ ಮುಡಿಪಿಟ್ಟ ನಂಬಿಗಸ್ಥರ ತಲೆ ದಂಡ

ಕಾಲನ ಹೊಡೆತಕ್ಕೆ ಕಳೆದು ಹೋಗಲು ....

ಇಸ್ಟೇ ಸಾಕಿರ ಬಹುದು....

"ಇದೇನು ದೇವಸ್ತಾನ ಅಂದುಕೊಂಡಿದ್ದಾರ ಇಲ್ಲಿ ಕುಳಿತು ಕೊಳ್ಳಲು"

ನನಗೆ ಅರೆಬರೆ ತಿಳಿಯುವ ಅವರದೇ ಭಾಷೆಯಲ್ಲಿ ಹೇಳುತ್ತಾ ಬಂದ

ಪೋಲಿಸ್ ನನಗೆ ಅಂದಿದ್ದು ಗೊತ್ತಾಗಿ ಅಲ್ಲಿಂದ ಎದ್ದೆ ....

ಸರ್ಕಾರ ಪೂರ್ತಿಯಾಗಿ ಹಣ ಗಳಿಸಲು ಮಾತ್ರವೇ

ಉಪಯೋಗಿಸಿದನ್ತಿತ್ತು ಅರಮನೆ ...

ಮಳೆಗೆ ನೀರು ಸೋರಿದ ಗುರುತು .....

"ಉತ್ತರದ ಮೂಲೆಯ ಎರಡನೇ ಕೋಣೆ"

ನಿನ್ನ ಮುತ್ತಜ್ಜಿಯದು ನೋಡದೆ ಬರಬೇಡ ..

ಅಮ್ಮ ಹೇಳಿದ್ದು ನೆನಪಾಗಿ ಅತ್ತ ಮುಖ ಮಾಡಿದೆ ...

ಬಾಗಿಲು ಹಾಕಿತ್ತು ... ಕೊಲೂರುವ ಮುತ್ತಜ್ಜಿ ಬಾಗಿಲು ತೆರೆಯ ಬಾರದ ...

ಮುಖ ನೋಡಿದವನಲ್ಲ ಮುತ್ತಜ್ಜಿಯದು ... ಇದ್ದರೆ ಬೆನ್ನು ಬಾಗಿ .. ಕೊಲುರುವ

ಹಾಗಿರ ಬಹುದು .... ಅಂದು ಕೊಂಡೆ ....

ರೇಷ್ಮೆ ಸೀರೆ ... ಅಕ್ಕ ಪಕ್ಕ ಸೇವಕಿಯರು ...

ಇಂತಹ ಬದುಕು ಬದುಕಿದವಳ ?

ಅಥವ ಹತ್ತೆಂಟು ರಾಣಿಯರ ನಡುವೆ ಕಳೆದು ಹೋದವಳ ?

ಕಿಟಕಿಯ ಸಂದಿಯಿಂದ ಕಾಣ ಬಹುದು...

ಇಣುಕಿದೆ ಮರದ ಮಂಚ .ಪಕ್ಕದ ಕುರ್ಚಿ...

ಸಣ್ಣ ಟಿಪಾಯಿ ....ಇದೆಲ್ಲ ಮುತ್ತಜ್ಜಿ ಉಪಯೋಗಿಸಿದ್ದ ?

ಅರಮನೆಯ ಮೂಲೆ ಮೂಲೆ ಓಡಾಡಿರ ಬಹುದು ...

ಸೊಸೆ ಯಾಗಿ ಬಂದಾಗ ಖುಷಿಯಿತ್ತ ... ಕೇಳಬೇಕಿತ್ತು ...

ನನ್ನ ಸಾವಿರಾರು ಪ್ರಶ್ನೆ ಗಳಿಗೆ ಉತ್ತರ ಬೇಕಿತ್ತು ...

ಸಂಜೆಯಾಗುತ್ತ ಬಂದಂತೆ ಅರಮನೆಯ ಕಿಟಕಿಯಿಂದ ಬೆಳಕು ಒಳ ಬರುತ್ತಿತ್ತು ..
ಸುಂದರ ವಾಸ್ತು ಕಲ್ಪನೆ ....

ಇದೆಲ್ಲವನ್ನು ಮರೆಸಿ ಮತ್ತೆ ಮತ್ತೆ ... ದುರಂತ ನೆನಪಾಗಿ


ನಿಧಾನ ಹೊರ ಬಂದೆ ....

ಇನ್ನೆಂದು ಯಾರಿಗೂ ಇಂತಹ ಭಾವ ಬರದಿರಲಿ ...

ಇನ್ನೆಂದು ಬರಲಾರೆ ... ಇಲ್ಲಿಗೆ ....

ಎಲ್ಲರಂತೆ ... ಅರಮನೆಯ ಎದುರು ನಿಂತು ... ಫೋಟೋ ಕ್ಕೆ ಹಲ್ಕಿರಿದು ....

ಹೊರಟೆ .....







Sunday 17 February 2013

ಎಂದೂ ಮಾಸದ ನೆನಪು....


ಮೊನ್ನೆ ಸಿಕ್ಕ ಮಗುವಿನ  ಬೊಚ್ಚು ನಗು ....

ನಿಮಗೂ ನೆನಪಿರ ಬಹುದು ....  

ಪುಟಗಳಲಿ ಮರೆಯಾಗದ ಎಂದಿಗೂ ಹಸಿರೆನಿಸುವ 

ನೆನಪುಗಳು ಬೆಂದ ಬದುಕಿಗೆ   ತಂಪನೆರೆಯ  ಬಹುದು  .... 

ಯಾವುದೊ ಕತೆಗೆ ಚೌಕಟ್ಟು ಹಾಕುತ್ತ ಕುಳಿತವಳಿಗೆ .... 

 ನೀನು ಹೀಗೆ ಕನಸು ಕಟ್ಟಿರ ಬಹುದಾ  ಅನ್ನಿಸಿತು ... 

ನನ್ನ ದಶಕಗಳ  ಹಳೆಯ ಗೆಳತಿ ನೀನು...

ನೀನು ನನ್ನಿಂದ ಕಾಣೆಯಾಗಿ  ಆರೇಳು ವರುಷ ಗಳೇ ಆಯಿತಲ್ಲವಾ  ... 

ಯಾಕೋ ನಂಬಲಾಗುತ್ತಿಲ್ಲ ... 

ಎಲ್ಲೋ  ನಾನು   ನನ್ನ ಹಳೆಯ ವಿಳಾಸಕ್ಕೆ ಹೋದಾಗ 

.... ಒಮ್ಮೆ ಲೇಟರ್ ಬಾಕ್ಸ್ ನತ್ತ  ಕಣ್ಣಾಡಿಸದೆ  ಬರುವದಿಲ್ಲ .... 

ಇರ ಬಹುದು ನಿನ್ನ ಪತ್ರ ..... 

 ಎನ್ನುವ ನಂಬಿಕೆ ಇನ್ನು ನನ್ನ ಬೆನ್ನಿಗಿದೆ  ಹುಡುಗಿ.... 

ಯಾವತ್ತೂ....   

ನಾನು ನಿನ್ನ ಬಗ್ಗೆ ವಿಚಾರಿಸಿದಾಗ ನಿನ್ನಮ್ಮ  ಹೇಳಿದ ಮಾತು 

ಇನ್ನು  ಗುಂಯಿ ಗುಡುತ್ತಿದೆ .... 

"ನಿನಗೇನಾದರೂ ಹೇಳಿದ್ದಾಳ ? 

ಎಲ್ಲಿಗೆ ಹೋಗುವೆನೆಂದು ?" 

ಅಂದೇ  ಕೊನೆ ಮತ್ತೆ ಮಾತಿಲ್ಲ  ನಮ್ಮಲ್ಲಿ ....

ನನ್ನಲ್ಲೂ  ಪ್ರಶ್ನೆ  ಗಳಿದೆ  ಎಲ್ಲಿದ್ದಿಯ ?  ಹೇಗಿದ್ದೀಯ? 

ಯಾಕೆ ಬಿಟ್ಟು ಹೋದದ್ದು ? 

ಮೊನ್ನೆ ಮೊನ್ನೆಯಂತೆ ಮಾತು ನಗು ಇನ್ನು ಹಸಿರಾಗಿದೆ ......

ಅಕ್ಕ, ಅಮ್ಮ, ಅಣ್ಣ ಎಲ್ಲರ ಫೋನ್  ಅವತ್ತೊಂದು ದಿನ .......  

ಅಸ್ಟೇ,  ಆಮೇಲೆ ಮಾತಿಲ್ಲ ನಿನ್ನ ಸುದ್ದಿಯೂ ಇಲ್ಲ ...

ನನ್ನ ಮದುವೆ ಗೆ  ಎಲ್ಲಿದ್ದರೂ  ಬರುತ್ತೀನಿ ಅಂದವಳು ಬರಬಹುದು  

ಅಂದು ಕೊಂಡದ್ದೆ ಬಂತು ... 

ಮದುವೆಗೆ ಒಂದು ವಾರವಿದೆ ಅನ್ನುವಾಗ  ಫೋನ್ ಮಾಡಿ ....  

 ಹುಡುಕಬೇಡಿ  ಅವಳನ್ನ .... 

"ಆಕೆ ನಕ್ಸಲೇಟ್ ಜೊತೆಗೆ ಹೋಗಿದ್ದಾಳೆ "

ಹೇಗೆ ಹೇಳುವದು ಗೊತ್ತಿಲ್ಲದೇ ಇಷ್ಟು ದಿನ ಕಳೆದೆ ....  

-ನಿನ್ನ ಪ್ರೀತಿಯ ಹುಡುಗ ಹೇಳಿದಾಗ ...

ಅಂತ ಹೇಳಿದಾಗ ಎನುತ್ತರಿಸಲಿ ಗೊತ್ತಾಗಲಿಲ್ಲ .....

ಮತ್ತೆ ಎಂದಿನಂತೆ ಮೌನ ದ ಮೊರೆ ಹೊಕ್ಕೆ  ..

ಅವತ್ತು ಯಾವುದೋ  ಮಾಲ್ ನ ಕೊನೆಯ ಮಹಡಿಯ

  ರೆಸ್ಟೋರೆಂಟ್  ನಲ್ಲಿ ಏನೋ ಮೆದ್ದು ಕೆಳಗಿಳಿಯುವಾಗ  

ಎದುರಾದದ್ದು  ನೀನೆ ...... 

ಮೊನ್ನೆ ಚಿತ್ರ ಸಂತೆ ಯಲ್ಲಿ ಫೈಬರ್ ಚೇರ್ ನಲ್ಲಿ ಪುಟ್ಟ ಮಗುವನ್ನೆತ್ತಿ 

ಕುಳಿತವಳು ನೀನೆ .....  

ಯಾಕೆ ಮಾತಾಡಲಿಲ್ಲ ...

ಚಿತ್ರ ಸಂತೆ ಯಲ್ಲಿ ನೀನು ನಕ್ಕಿದ್ದೆ ..... 

ನನ್ನ ಗೊಂದಲದಲ್ಲಿ ಯಾಕೆ ಮಾತಾಡಲಿಲ್ಲ 

ನೀನೆ ಅಲ್ಲವಾ ಅಂತೆಲ್ಲ ನನ್ನಲ್ಲಿ ಮಾತಾಡಿ ಕೊಂಡು  

ಮತ್ತೆ ನಿನಿದ್ದಲ್ಲಿಗೆ ಬಂದಾಗ ನೀನಿರಲಿಲ್ಲ  ಅಲ್ಲಿ ....

ಮಗುವಿನ  ಬೊಚ್ಚು ನಗು...

ನೆನಪು  ಯಾವತ್ತು ಮರೆಯಲಾಗದು ನನ್ನಲ್ಲಿ ...

ನಿನಗೆ ನನ್ನ ಗುರುತೇ ಸಿಗಲಿಲ್ಲವ ?

ಹೇಗೆ ಸಿಕ್ಕಿತು  ಹೇಳು  ಹೊಟ್ಟೆಗೆ   ಇಲ್ಲದವನಂತೆ  ಇದ್ದಾಗ  ನೋಡಿದ್ದು ...

ಇಗ ಮೂರು ವರೆ  ಕ್ವಿಂಟಾಲ್   ತೂಗುವ ನನ್ನ ನೋಡಿದರೆ .... 

ಯಾರಿಗೆ ತಾನೆ ನಂಬಲಾ ದೀತು ?

ಇನ್ನೇಲ್ಲಾದರೂ   ಎದುರು ಸಿಕ್ಕರೆ  ನಗುವದ ಮರೆಯಬೇಡ ..........