Thursday 12 April 2012

ಮಹಲು



ನಮ್ಮ ಪ್ರೀತಿ  ಕೇವಲ 
ನಮ್ಮೊಳಗಿದ್ದ  ಭಾವನೆ 
ತೋರಿಸ ಬೇಕಿರಲಿಲ್ಲ  ಜಗತ್ತಿಗೆ 
ಅದಕ್ಕೆ 
ಕಟ್ಟಿಸಲಿಲ್ಲ ದರ್ಪ ಸಂಪತ್ತಿನ  ಮಹಾಮನೆ....

ನಿನ್ನೋಳಗಿದ್ದ ಪ್ರೀತಿ ನನ್ನೆಡೆಗಿತ್ತು...
ಅದರಂತೆ  ನಿನ್ನೆಡೆಗೆ ನನ್ನದು 
ಆಗ ಬೇಕಿರಲಿಲ್ಲ ರೋಮಿಯೋ -ಜ್ಯೂಲಿಯೆಟ್
ಪಾರೂ-ದೇವದಾಸ್ ,ಷಹಜಹಾನ್ -ಮಮ್ತಾಜ್....

ಬೇಕಿರಲಿಲ್ಲ ದುರಂತ ನಾಯಕನಾಗುವದು
ಅಮರ ಪ್ರೇಮಿಯಾಗುವದು.....
ಸಾಮಾನ್ಯನಾಗಿದ್ದರೆ ಸಾಕು 
ನಮ್ಮದೇ ಲೋಕದಲ್ಲಿ  ನೆಮ್ಮದಿಯಾಗಿರಲು.

ಸಾರಬೇಕಿರಲಿಲ್ಲ ಜಗತ್ತಿಗೆ 
ಪ್ರೀತಿಯೊಂದೇ ಸಾಕಿತ್ತು ಬದುಕಿಗೆ 
ಉಳಿಯ ಬೇಕಿರಲಿಲ್ಲ ಇತಿಹಾಸವಾಗಿ 
ಚರಿತ್ರೆ ತಿರುಚಿದ  ಅಪಹಾಸ್ಯವಾಗಿ......

ಹೇಳು,  ನಾ ಮಾಡಿದ್ದರಲ್ಲೇನಾದರೂ ತಪ್ಪು ?
ಮಣ್ಣಿನಲ್ಲಿ ಮಣ್ಣಾಗುವ ದೇಹಕ್ಕೆ  ಕ್ಷಣ....
ಕ್ಷಣಕ್ಕೆಲ್ಲ  ಬರುವ ನೆನಪಿನ ನೋವಿಗೆ 
ಕಟ್ಟಿಸ ಬೇಕಿ ತ್ತೇ ಮಹಲು ............