ನಮ್ಮ ಪ್ರೀತಿ ಕೇವಲ
ನಮ್ಮೊಳಗಿದ್ದ ಭಾವನೆ
ತೋರಿಸ ಬೇಕಿರಲಿಲ್ಲ ಜಗತ್ತಿಗೆ
ಅದಕ್ಕೆ
ಕಟ್ಟಿಸಲಿಲ್ಲ ದರ್ಪ ಸಂಪತ್ತಿನ ಮಹಾಮನೆ....
ನಿನ್ನೋಳಗಿದ್ದ ಪ್ರೀತಿ ನನ್ನೆಡೆಗಿತ್ತು...
ಅದರಂತೆ ನಿನ್ನೆಡೆಗೆ ನನ್ನದು
ಆಗ ಬೇಕಿರಲಿಲ್ಲ ರೋಮಿಯೋ -ಜ್ಯೂಲಿಯೆಟ್
ಪಾರೂ-ದೇವದಾಸ್ ,ಷಹಜಹಾನ್ -ಮಮ್ತಾಜ್....
ಬೇಕಿರಲಿಲ್ಲ ದುರಂತ ನಾಯಕನಾಗುವದು
ಅಮರ ಪ್ರೇಮಿಯಾಗುವದು.....
ಸಾಮಾನ್ಯನಾಗಿದ್ದರೆ ಸಾಕು
ನಮ್ಮದೇ ಲೋಕದಲ್ಲಿ ನೆಮ್ಮದಿಯಾಗಿರಲು.
ಸಾರಬೇಕಿರಲಿಲ್ಲ ಜಗತ್ತಿಗೆ
ಪ್ರೀತಿಯೊಂದೇ ಸಾಕಿತ್ತು ಬದುಕಿಗೆ
ಉಳಿಯ ಬೇಕಿರಲಿಲ್ಲ ಇತಿಹಾಸವಾಗಿ
ಚರಿತ್ರೆ ತಿರುಚಿದ ಅಪಹಾಸ್ಯವಾಗಿ......
ಹೇಳು, ನಾ ಮಾಡಿದ್ದರಲ್ಲೇನಾದರೂ ತಪ್ಪು ?
ಮಣ್ಣಿನಲ್ಲಿ ಮಣ್ಣಾಗುವ ದೇಹಕ್ಕೆ ಕ್ಷಣ....
ಕ್ಷಣಕ್ಕೆಲ್ಲ ಬರುವ ನೆನಪಿನ ನೋವಿಗೆ
ಕಟ್ಟಿಸ ಬೇಕಿ
ತ್ತೇ ಮಹಲು ............