ಪ್ರೀತಿಯ ಸುಂದ್ರು ..
ತುಂಬಾನೇ ದಿನದಿಂದ....... ಅಲ್ಲಾ ವರ್ಷ ಗಳಿಂದ
ನಿನ್ನಲ್ಲಿ ಒಂದು ವಿಚಾರ ಹೇಳಲೇ ಬೇಕು ಅಂತ ಕಾಯುತ್ತಿದ್ದೆ ....
ನೀನು ಎದುರಾದಾಗೆಲ್ಲಾ ನನ್ನ ಮನದಲ್ಲಿ ಹೇಳಲೋ ಬೇಡವೋ ಅಂತಾ ....
ಗೊಂದಲ .....
ನಾವು ನಮ್ಮ ಓದು ಮುಗಿದು.....
ನಮ್ಮ - ನಮ್ಮದೂ ಅಂತ ಬದುಕು ಕಟ್ಟಿ ಕೊಂಡ ಮೇಲೆ...
ನಾವಾಗಿ ಯಾವತ್ತೂ ಬೇಟಿಯಾಗಿಲ್ಲ ..... ಅಂತ ನನ್ನ ಮನಸ್ಸು ಹೇಳ್ತಿದೆ
ನಾವು ಬೇಟಿಯಗಿದ್ದು ....
ನೀನು ಒಬ್ಬಳ ಗಂಡನಾಗಿ , ಮಕ್ಕಳ ಅಪ್ಪನಾಗಿ, ಅಮ್ಮನ ಮಗನಾಗಿ ....
ಒಂದು MNC ಯಲ್ಲಿ ಬಾಸ್ ಆಗಿ .....
ಹಾಗೆ ನಾನು ಒಬ್ಬನ ಹೆಂಡತಿಯಾಗಿ , ಮಕ್ಕಳ ಅಮ್ಮನಾಗಿ ....
ಮಗಳು ಸೊಸೆ ನಾದಿನಿ ಅತ್ತಿಗೆ ಪಾತ್ರ ಗಳ ಸುತ್ತ ಕಳೆದು ಹೋಗಿ,
ನನ್ನ ಕೆಲಸದ ಒತ್ತಡದ ಬಗ್ಗೆ ಹೀಗೆ ಮಾತಾಡಿದ್ದಿವಿ.....
ಯಾವತ್ತೂ ಹೇಳ ಬೇಕೆಂದಿದ್ದದ್ದನ್ನ ಹೇಳಲೇ ಬೇಕು ಅಂತಾ
ಅಂದು ಕೊಂಡಾಗೆಲ್ಲ.....
ಕಳೆದು ಕೊಂಡದ್ದನ್ನ ..... ಮತ್ತೆ ನೆನಪಿಸುವದು ಬೇಡ
ಅಂತ ಸುಮ್ಮನಾಗುತ್ತಿದ್ದೆ ...
ಆದ್ರು ನಿನ್ನೆದುರು ಹೇಳಲು .... ಕೊನೆಗೂ ಆಗಲೇ ಇಲ್ಲ .....
ನಿನ್ನ ಚಿನ್ನದ ಪದಕದ ಓದಿಗೆ..... ಪಟ್ಟಣದ ಕೆಲಸ ಕರೆದು ಮಣೆ ಹಾಕಿತು ....
ಅವಕಾಶದ ಬಾಗಿಲು ತೆರೆದು ಕೊಂಡಿತು ....
ಸಿಕ್ಕ ಅವಕಾಶ ವನ್ನ ನೀನು ಉಪಯೋಗಿಸಿ ಕೊಂಡೆ .....
ಅದಿಕ್ಕೆ ನೀನು ಎತ್ತರದ ಹುದ್ದೆ ಯಲ್ಲಿದ್ದಿಯ.....
ಒಳ್ಳೆಯ ಹುಡುಗಿಯ ಜೊತೆ ಮದುವೆಯೂ ಆಯಿತು...
ನಿನಗೀಗ ಯಾವ ಕೊರತೆಯೂ ಇಲ್ಲ
ಇದನ್ನೆಲ್ಲ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ ....
ಎಲ್ಲಾರಿ ಗಿಂತ ಹೆಚ್ಚು ಸಂಭ್ರಮ ಪಟ್ಟಿದ್ದು ನಿನ್ನ "ಅಣ್ಣ "
ನಿನಗೆ ಅಪ್ಪ ನ ಕೊರತೆ ಕಾಡದಿರಲಿ ಅಂತಾ ತನ್ನ ಸುಖ ವನ್ನ ಪಕ್ಕಕ್ಕಿಟ್ಟು ..
ನಿಮ್ಮನ್ನೆಲ್ಲ ಮಕ್ಕ ಳಂತೆ ಬೆಳೆಸಿದ ಅಣ್ಣ ......
ಅಣ್ಣನಲ್ಲಿ ಎಲ್ಲ ಇಲ್ಲ ವನ್ನೇ ಹುಡುಕಿದೆ ಯಾಕೆ ?
ಯಾಕೆ ಅಮ್ಮ ನಲ್ಲಿ ಗೊಂದಲದ ಬೀಜ ಬಿತ್ತಿದೆ .....
ಫೋನ್ ಮಾಡಿದಾಗೆಲ್ಲ " ಅವತ್ತೇ ಹಣ ಕಳಿಸಿದ್ದೇನಲ್ಲ
ಇನ್ನು ತೋಟದ ಕೆಲಸ ಅಣ್ಣ ಮಾಡಿಸಿಲ್ಲವ "
" ಅಕ್ಕ ಅಣ್ಣ ಮಾಡುತ್ತಿರೋದು ನೋಡು ಏನು ಕೊರತೆ ಮಾಡಿದ್ದೀನಿ ಅಂತ
ಹೀಗೆ ಮಾಡುತ್ತಾನೆ ಗೊತ್ತಿಲ್ಲ "
ಅಮ್ಮ ಅಕ್ಕಂದಿರೆದುರು ಅಣ್ಣ ನನ್ನ ವಿಲನ್ ಮಾಡಿ ಬಿಟ್ಟೆ......
ಒಮ್ಮೆ ಮನೆಗೆ ಬಂದು ೧೫ ದಿನ ಇದ್ದು ಕೆಲಸ ಮಾಡಿಸಿದ್ದರೆ ನಿನಗೆ
ಗೊತ್ತಾಗುತ್ತಿತ್ತು .... ಪರಿಸ್ತಿತಿ ..
ಕೆಲಸ ದವರ ಮನೆಗೆ ದಿನಾಲೂ ಅಲೆಯೋದು .......
ಕೊನೆಗೂ ತನಗಾದ ವಯಸ್ಸಿನ ಪರಿವೆಯೇ ಇಲ್ಲದೆ ....
ಟೈಮ್ ಇಲ್ಲದೆ ಕೆಲಸ ಮಾಡೋದು ....
ಹೊತ್ತು ಗೊತ್ತಿಲ್ಲದ ಊಟ ......
ಬೆನ್ನು ಬಾಗಿದ ಅಮ್ಮ ನಿನ್ನ ಮಾತು ಕೇಳಿಕೊಂಡು
ನೀನು ವದರಿದ್ದೆ ಬದ್ದ ಅಂದು ಕೊಂಡು...
ಒಂಟಿ ಅಣ್ಣನ ಇದ್ದ ಬದ್ದ ನೆಮ್ಮದಿಗೂ ಕಲ್ಲು ಬಿದ್ದು ......
ಮೌನಿ ಆದ......... ತಾನೆ ಬೆಳೆಸಿದ ತಂಗಿ - ತಮ್ಮಂದಿರ ಮೇಲಿನ ಮಮತೆ
..... ದೂರ ಹೋಯಿತು
ಆತನ ಬೇಸರ ನಿಮಗೆ ಗೊತ್ತಾಗಲೇ ಇಲ್ಲ ..............
ನಿನಗೆ ಅಮ್ಮ ಆಸ್ಪತ್ರೆ ಸೇರಿದಾಗಲು ಅತ್ತ ಹೋಗಲು
ನಿನ್ನ ಕೆಲಸ ನಿನ್ನ ಬಿಡಲಿಲ್ಲ .....
ವಾರಗಳು ಅಲ್ಲೇ ಕಳೆದು ಮನೆ ಆಸ್ಪತ್ರೆ ಇದೆಲ್ಲ ಅವನೇ ಮಾಡಿದ
( ನೀನೆ ಹೇಳಿದಂತೆ ನಿನ್ನ ಹಣದಲ್ಲಿ )
ಅವತ್ತು ಅಣ್ಣ ಮನೆಗೆ ಹೋಗಿ ವಾಪಸ್ಸಾಗುವ ಮುನ್ನ ಅಮ್ಮ ಪ್ರಾಣ ಬಿಟ್ಟಿದ್ದಳು .....
ಆ ಸಾವಿಗೂ ಅವನನ್ನೇ ಕಾರಣ ಮಾಡಿದ್ದೂ ಎಷ್ಟು ಸರಿ ?
"ಹುಟ್ಟಿದವನಿಗೆ ಸಾವು ಖಂಡಿತ "
ಇದು ನಿನ್ನೊಬ್ಬನ ಕಥೆ ಅಲ್ಲಾ ಸುಂದ್ರ ,
ತನ್ನ ತನ ವನ್ನು ಬಿಟ್ಟು ಕುಟುಂಬದ ಏಳಿಗೆಗೆ .....
ಬದುಕಿದ ಎಲ್ಲ ಅಣ್ಣ ಅಕ್ಕಂದಿರ
ಇಂದಿನ ಪರಿಸ್ತಿತಿ .....
ದಿನವು ಜೊತೆಗಿದ್ದು ಬೇಕು ಬೇಡ ಗಳನ್ನೆಲ್ಲ ನೋಡಿ ಕೊಂಡವರಿಗಿಂತ
ದೂರದಲ್ಲಿದ್ದು ಬಣ್ಣದ ಮಾತಾಡಿದ ಮಕ್ಕಳನ್ನೇ ನಂಬುವ.....
ಅಮ್ಮಂದಿರ ಕಥೆ............
ಯಾಕೆ ನಿನಗಿದೆಲ್ಲ ಗೊತ್ತೇ ಆಗಲಿಲ್ಲವ ?
ಹಣ ನಮ್ಮನ್ನ ಕಟ್ಟಿ ಹಾಕುತ್ತಿದೆಯ ...... ಅಥವಾ ಪರಿಸ್ಥಿತಿ ಯಾ ?
ನಿನ್ನ ಕಾರಣ ನನಗೆ ಬೇಕಿಲ್ಲ .....
ಒಮ್ಮೆ ಹೋಗಿ ಮಾತಾಡಿಸು ಅದೇ ತೋಟದಲ್ಲಿ ಅಣ್ಣ ನಿನಗೆ ಸಿಗಬಹುದು .....
--ಅನು
ತುಂಬಾನೇ ದಿನದಿಂದ....... ಅಲ್ಲಾ ವರ್ಷ ಗಳಿಂದ
ನಿನ್ನಲ್ಲಿ ಒಂದು ವಿಚಾರ ಹೇಳಲೇ ಬೇಕು ಅಂತ ಕಾಯುತ್ತಿದ್ದೆ ....
ನೀನು ಎದುರಾದಾಗೆಲ್ಲಾ ನನ್ನ ಮನದಲ್ಲಿ ಹೇಳಲೋ ಬೇಡವೋ ಅಂತಾ ....
ಗೊಂದಲ .....
ನಾವು ನಮ್ಮ ಓದು ಮುಗಿದು.....
ನಮ್ಮ - ನಮ್ಮದೂ ಅಂತ ಬದುಕು ಕಟ್ಟಿ ಕೊಂಡ ಮೇಲೆ...
ನಾವಾಗಿ ಯಾವತ್ತೂ ಬೇಟಿಯಾಗಿಲ್ಲ ..... ಅಂತ ನನ್ನ ಮನಸ್ಸು ಹೇಳ್ತಿದೆ
ನಾವು ಬೇಟಿಯಗಿದ್ದು ....
ನೀನು ಒಬ್ಬಳ ಗಂಡನಾಗಿ , ಮಕ್ಕಳ ಅಪ್ಪನಾಗಿ, ಅಮ್ಮನ ಮಗನಾಗಿ ....
ಒಂದು MNC ಯಲ್ಲಿ ಬಾಸ್ ಆಗಿ .....
ಹಾಗೆ ನಾನು ಒಬ್ಬನ ಹೆಂಡತಿಯಾಗಿ , ಮಕ್ಕಳ ಅಮ್ಮನಾಗಿ ....
ಮಗಳು ಸೊಸೆ ನಾದಿನಿ ಅತ್ತಿಗೆ ಪಾತ್ರ ಗಳ ಸುತ್ತ ಕಳೆದು ಹೋಗಿ,
ನನ್ನ ಕೆಲಸದ ಒತ್ತಡದ ಬಗ್ಗೆ ಹೀಗೆ ಮಾತಾಡಿದ್ದಿವಿ.....
ಯಾವತ್ತೂ ಹೇಳ ಬೇಕೆಂದಿದ್ದದ್ದನ್ನ ಹೇಳಲೇ ಬೇಕು ಅಂತಾ
ಅಂದು ಕೊಂಡಾಗೆಲ್ಲ.....
ಕಳೆದು ಕೊಂಡದ್ದನ್ನ ..... ಮತ್ತೆ ನೆನಪಿಸುವದು ಬೇಡ
ಅಂತ ಸುಮ್ಮನಾಗುತ್ತಿದ್ದೆ ...
ಆದ್ರು ನಿನ್ನೆದುರು ಹೇಳಲು .... ಕೊನೆಗೂ ಆಗಲೇ ಇಲ್ಲ .....
ನಿನ್ನ ಚಿನ್ನದ ಪದಕದ ಓದಿಗೆ..... ಪಟ್ಟಣದ ಕೆಲಸ ಕರೆದು ಮಣೆ ಹಾಕಿತು ....
ಅವಕಾಶದ ಬಾಗಿಲು ತೆರೆದು ಕೊಂಡಿತು ....
ಸಿಕ್ಕ ಅವಕಾಶ ವನ್ನ ನೀನು ಉಪಯೋಗಿಸಿ ಕೊಂಡೆ .....
ಅದಿಕ್ಕೆ ನೀನು ಎತ್ತರದ ಹುದ್ದೆ ಯಲ್ಲಿದ್ದಿಯ.....
ಒಳ್ಳೆಯ ಹುಡುಗಿಯ ಜೊತೆ ಮದುವೆಯೂ ಆಯಿತು...
ನಿನಗೀಗ ಯಾವ ಕೊರತೆಯೂ ಇಲ್ಲ
ಇದನ್ನೆಲ್ಲ ನೋಡಿ ಎಲ್ಲರೂ ಸಂತೋಷ ಪಟ್ಟಿದ್ದಾರೆ ....
ಎಲ್ಲಾರಿ ಗಿಂತ ಹೆಚ್ಚು ಸಂಭ್ರಮ ಪಟ್ಟಿದ್ದು ನಿನ್ನ "ಅಣ್ಣ "
ನಿನಗೆ ಅಪ್ಪ ನ ಕೊರತೆ ಕಾಡದಿರಲಿ ಅಂತಾ ತನ್ನ ಸುಖ ವನ್ನ ಪಕ್ಕಕ್ಕಿಟ್ಟು ..
ನಿಮ್ಮನ್ನೆಲ್ಲ ಮಕ್ಕ ಳಂತೆ ಬೆಳೆಸಿದ ಅಣ್ಣ ......
ಅಣ್ಣನಲ್ಲಿ ಎಲ್ಲ ಇಲ್ಲ ವನ್ನೇ ಹುಡುಕಿದೆ ಯಾಕೆ ?
ಯಾಕೆ ಅಮ್ಮ ನಲ್ಲಿ ಗೊಂದಲದ ಬೀಜ ಬಿತ್ತಿದೆ .....
ಫೋನ್ ಮಾಡಿದಾಗೆಲ್ಲ " ಅವತ್ತೇ ಹಣ ಕಳಿಸಿದ್ದೇನಲ್ಲ
ಇನ್ನು ತೋಟದ ಕೆಲಸ ಅಣ್ಣ ಮಾಡಿಸಿಲ್ಲವ "
" ಅಕ್ಕ ಅಣ್ಣ ಮಾಡುತ್ತಿರೋದು ನೋಡು ಏನು ಕೊರತೆ ಮಾಡಿದ್ದೀನಿ ಅಂತ
ಹೀಗೆ ಮಾಡುತ್ತಾನೆ ಗೊತ್ತಿಲ್ಲ "
ಅಮ್ಮ ಅಕ್ಕಂದಿರೆದುರು ಅಣ್ಣ ನನ್ನ ವಿಲನ್ ಮಾಡಿ ಬಿಟ್ಟೆ......
ಒಮ್ಮೆ ಮನೆಗೆ ಬಂದು ೧೫ ದಿನ ಇದ್ದು ಕೆಲಸ ಮಾಡಿಸಿದ್ದರೆ ನಿನಗೆ
ಗೊತ್ತಾಗುತ್ತಿತ್ತು .... ಪರಿಸ್ತಿತಿ ..
ಕೆಲಸ ದವರ ಮನೆಗೆ ದಿನಾಲೂ ಅಲೆಯೋದು .......
ಕೊನೆಗೂ ತನಗಾದ ವಯಸ್ಸಿನ ಪರಿವೆಯೇ ಇಲ್ಲದೆ ....
ಟೈಮ್ ಇಲ್ಲದೆ ಕೆಲಸ ಮಾಡೋದು ....
ಹೊತ್ತು ಗೊತ್ತಿಲ್ಲದ ಊಟ ......
ಬೆನ್ನು ಬಾಗಿದ ಅಮ್ಮ ನಿನ್ನ ಮಾತು ಕೇಳಿಕೊಂಡು
ನೀನು ವದರಿದ್ದೆ ಬದ್ದ ಅಂದು ಕೊಂಡು...
ಒಂಟಿ ಅಣ್ಣನ ಇದ್ದ ಬದ್ದ ನೆಮ್ಮದಿಗೂ ಕಲ್ಲು ಬಿದ್ದು ......
ಮೌನಿ ಆದ......... ತಾನೆ ಬೆಳೆಸಿದ ತಂಗಿ - ತಮ್ಮಂದಿರ ಮೇಲಿನ ಮಮತೆ
..... ದೂರ ಹೋಯಿತು
ಆತನ ಬೇಸರ ನಿಮಗೆ ಗೊತ್ತಾಗಲೇ ಇಲ್ಲ ..............
ನಿನಗೆ ಅಮ್ಮ ಆಸ್ಪತ್ರೆ ಸೇರಿದಾಗಲು ಅತ್ತ ಹೋಗಲು
ನಿನ್ನ ಕೆಲಸ ನಿನ್ನ ಬಿಡಲಿಲ್ಲ .....
ವಾರಗಳು ಅಲ್ಲೇ ಕಳೆದು ಮನೆ ಆಸ್ಪತ್ರೆ ಇದೆಲ್ಲ ಅವನೇ ಮಾಡಿದ
( ನೀನೆ ಹೇಳಿದಂತೆ ನಿನ್ನ ಹಣದಲ್ಲಿ )
ಅವತ್ತು ಅಣ್ಣ ಮನೆಗೆ ಹೋಗಿ ವಾಪಸ್ಸಾಗುವ ಮುನ್ನ ಅಮ್ಮ ಪ್ರಾಣ ಬಿಟ್ಟಿದ್ದಳು .....
ಆ ಸಾವಿಗೂ ಅವನನ್ನೇ ಕಾರಣ ಮಾಡಿದ್ದೂ ಎಷ್ಟು ಸರಿ ?
"ಹುಟ್ಟಿದವನಿಗೆ ಸಾವು ಖಂಡಿತ "
ಇದು ನಿನ್ನೊಬ್ಬನ ಕಥೆ ಅಲ್ಲಾ ಸುಂದ್ರ ,
ತನ್ನ ತನ ವನ್ನು ಬಿಟ್ಟು ಕುಟುಂಬದ ಏಳಿಗೆಗೆ .....
ಬದುಕಿದ ಎಲ್ಲ ಅಣ್ಣ ಅಕ್ಕಂದಿರ
ಇಂದಿನ ಪರಿಸ್ತಿತಿ .....
ದಿನವು ಜೊತೆಗಿದ್ದು ಬೇಕು ಬೇಡ ಗಳನ್ನೆಲ್ಲ ನೋಡಿ ಕೊಂಡವರಿಗಿಂತ
ದೂರದಲ್ಲಿದ್ದು ಬಣ್ಣದ ಮಾತಾಡಿದ ಮಕ್ಕಳನ್ನೇ ನಂಬುವ.....
ಅಮ್ಮಂದಿರ ಕಥೆ............
ಯಾಕೆ ನಿನಗಿದೆಲ್ಲ ಗೊತ್ತೇ ಆಗಲಿಲ್ಲವ ?
ಹಣ ನಮ್ಮನ್ನ ಕಟ್ಟಿ ಹಾಕುತ್ತಿದೆಯ ...... ಅಥವಾ ಪರಿಸ್ಥಿತಿ ಯಾ ?
ನಿನ್ನ ಕಾರಣ ನನಗೆ ಬೇಕಿಲ್ಲ .....
ಒಮ್ಮೆ ಹೋಗಿ ಮಾತಾಡಿಸು ಅದೇ ತೋಟದಲ್ಲಿ ಅಣ್ಣ ನಿನಗೆ ಸಿಗಬಹುದು .....
--ಅನು