ಮೊನ್ನೆ ನಾನು ಹೊರಡುವಾಗ ಅಮ್ಮ ಚೀಟಿ ಕೊಟ್ಟು ಪುರೋಸತ್ತದಾಗ ನೋಡು ಅಂದಿದ್ದಳು ,
ಎಂದು ಏಕೋ ನೆನಪಾಗಿ ಬ್ಯಾಗ್ ಎಲ್ಲ ಹುಡುಕಿದೆ, ಅದರಲ್ಲೊಂದು ಫೋನ್ ನಂಬರ್ ,........?
ತಲೆ ತುಂಬಾ ಬರೆ ಪ್ರಶ್ನೆ ? ಯಾರದ್ದಿರಬಹುದು ....
ಅಮ್ಮ ಕೊಟ್ಟಿದ್ದೇಕೆ ......?
ವಿಷಯ ನೇರ ಹೇಳುವ ಅಮ್ಮ ಯಾಕೆ ಹೀಗೆ ಮಾಡಿದಳು .....
ಗೊಂದಲದ ಗೂಡಾಗಿ ಅಮ್ಮನಿಗೆ ಫೋನ್ ನಾಯಿಸಿದೆ..
"ಯಾರದ್ದೇ ಅದು ನಂಬರ್ ... ಎಂತದು ಹೇಳದ್ದೆ ಕೊಟ್ಟರೆ .. ನಾನೆಂದುಕೊಳ್ಳಲಿ ..
ಹೆಸರಿಲ್ಲ ವಿಷಯ ಏನು ಗೊತ್ತಿಲ್ಲ ...
ಅಮ್ಮ ನಿಮ್ಮ ನಂಬರ್ ಕೊಟ್ಟರು ಅಂತ ಕಾಲ್ ಮಾಡಿದರೆ ಏನಂದು ಕೊಂಡಾರು.. "
ನನ್ನ ಗೊಂದಲವನ್ನೆಲ್ಲ ಸೇರಿಸಿ ಅಮ್ಮನಿಗೆ ವರ್ಗಾಯಿಸಿದೆ ..
ಸಿಟ್ಟು ನೆತ್ತಿಗೆರಿರ ಬೇಕು "ಬರುವ ಹೊತ್ತಿಗೆ ಸುರಬಾಣಕ್ಕೆ
ಬೆಂಕಿ ಇಟ್ಟುಕಂಡು ಬಂದರೆ, ನಾನು ಎಂತ ಹೇಳಲಾಗ್ತು ..
ನಿಂಗಕ್ಕೆಲ್ಲ ಎಲ್ಲಿ ಪುರಶತ್ತು ......." ದಬಾಯಿಸಿದರು .... ಕೇಳಿಸಿ ಕೊಂಡೆ..
ಸುಮ್ಮನೆ........ ಮಾತು ಬರಲೇ ಇಲ್ಲ.... ಅಮ್ಮ ಹೇಳಿದ್ದರಲ್ಲಿ ಸುಳ್ಳಿರಲಿಲ್ಲ...
ಓಡುವ ಕಾಲನ ವೇಗಕ್ಕೆ ಹೊಂದಿಕೊಳ್ಳುವ...
ಪ್ರಯತ್ನದಲ್ಲಿ ಎಲ್ಲೋ ಕಳೆದು ಹೋಗುತ್ತಿದ್ದಿನ..?
ಯಾಕೆ ನನ್ನವರಿಗೆ ಸಮಯ ಕೊಡಲು ಆಗುತ್ತಿಲ್ಲ ...?
ಬರೇ ವಾರದ ಕೊನೆಯ ದಿನಗಳು ಕುಟುಂಬಕ್ಕೆ ...
ಅಂದು ಕೊಂಡರು ಸಾದ್ಯ ವಾಗುತ್ತಿಲ್ಲ ..
ಯಾವುದೊ ಕೆಲಸ ಉಳಿದಿರುವದು ...
ನಿನ್ನೆ ಮಾಡಲಾರ ದ್ದಕ್ಕೆ ಇಂದು..
ಮುಗಿಯದ ಕೆಲಸ ಹಚ್ಚಿಕೊಂಡು....
ದ್ವೀಪವಾಗುತ್ತಿದ್ದಿವ..? ನನ್ನವರು ಹೋಗಿ ನಾನು ... ಆದದ್ದಕ್ಕೆ....
ಎಲ್ಲೋ ನನ್ನೊಳಗೆ ನಾನೆ ಕಳೆದು ಹೋಗಿದ್ದಕ್ಕೆ ..
ಕ್ಷಣ ಬೇಸರ ಕಾಡಿ... ಮತ್ತೆ ಕೆಲಸದಲ್ಲಿ ಕಳೆದು ಹೋಗುವ ನನ್ನನ್ತಹ ಎಡಬಿಡಂಗಿ ಗಳಿಗೆ ಸರಿಯಾಗೆ ಹೇಳಿದ್ದರು ಅಮ್ಮ ....
ನಂಬರ್ ಅದೇ ನಿನ್ನ ಜೊತೆಗೆ ಶಾಲೆಗೆ ಬರುತ್ತಿದ್ದ 'ಅನು' ದು ...
ಅವತ್ತು ಪೇಟೆಗೆ ಹೋದಾಗ ಬಟ್ಟೆ ಅಂಗಡಿಯಲ್ಲಿ ಸಿಕ್ಕಿದ್ದ"
ನಿನ್ನ ಹತ್ತಿರ ಮಾತಾಡ ಬೇಕು ಅಂತೆಲ್ಲ ಹೇಳಿದ್ದ ....
ನಿನ್ನ ನಂಬರ್ ನೆನಪಾಗದ್ದೆ....
ಅವಳದ್ದೇ ತಗಂಡು ಬಂದಿ
ಮಾಡಲ್ಲೆ ಹೇಳ್ತಿ ಹೇಳಿದ್ದಿ.... ಮರ್ತಿಕಡಾ...... ಅಲ್ಲಿ ..
ಸುಬ್ಬ ಬಂದು ನಿಂತಿದ್ದ ಮಜ್ಜಿಗೆ ತೋಟಕ್ಕೆ ತಗಂಡು ಹೋಗವಡಾ...
ಮಾತಾಡ್ತಿದ್ರೆ ಹೊತ್ತು ಹೋಗಿದ್ದೆ ಗೊತ್ತಾಗ್ತಿಲ್ಲೆ "
ಟಾಟಾ ....
ಅಮ್ಮ ಕೊಟ್ಟ ನಂಬರ್ ತಿರುವಿದೆ ....
ಅತ್ತ ಲಿಂದ ಅದೇ ದ್ವನಿ ಕೆಳ್ದ್ದೆ ಸುಮಾರು ವರ್ಷ ಕಳೆದಿತ್ತು ... ಬದಲಾಗಿರಲಿಲ್ಲ ...
ಅನು ನಾನೆ .... ಮಾತಿನಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ ... ಮಕ್ಕಳು ಅವರ ಶಾಲೆ .... ಸಂಕಷ್ಟಿ ..... ಅಡಿಕೆ ಕೊಳೆ ....ಬಿ-ಪಿ, ಶುಗರು ....
ಎಲ್ಲ ಮಾತಾದ ಮೇಲೆ, ಮೊಬೈಲ್ ಹೊಸದು ಕೊಡಿಸಿದರು ... ನನಗೀಗ ಚೂಡಿದಾರ್ ಹಾಕಲ್ಲೆ ಅಡ್ಡಿಲ್ಲೆ ಹೇಳಿದ್ದ ...
ನಂಗಂತೂ ಆಕಾಶಕ್ಕೆ ಮೂರೇ ಗೇಣು ...... ಅಂತೆಲ್ಲ ಅವಳು ಮಾತಾಡುತ್ತಿದ್ದರೆ .....ನಾನೆಲ್ಲೋ ಕಳೆದು ಹೋದ ಭಾವ ....
ವಿಶ್ ಮಾಡಿದೆ ಅವಳ ಖುಷಿಯಲ್ಲಿ ನಾನು ಬಾಗಿಯಾದೆ .....!
ಸಾಕು ಇನ್ನೊಂದು ದಿನ ಮಾತಾಡಕ್ಕೆ ವಿಷಯ ಇರ್ಲಿ...ಇವತ್ತಿಗೆ ಸಾಕು ಅಂತ ಅವಳೇ ಕಟ್ ಮಾಡಿದಳು ....
ನಾನು ಸುಮಾರು ವರ್ಷ ಹಿಂದಕ್ಕೆಓಡಿದೆ...........
ಗುಬ್ಬಿ ಎಂಜಲು ಮಾಡಿ ತಿನ್ನುತ್ತಿದ್ದ ಭಟ್ರ ಮನೆಯ ಪೇರಳೆ ಹಣ್ಣು ....ರಜದಲ್ಲಿ ಇಜಾಡುತ್ತಿದ್ದ ಹೊಳೆ ಕಟ್ಟು ...
ಹೊಳೆ ಸಂಕದ ಮೇಲೆ ಕುಳಿತು ...ತಿಂದ ಪಕ್ಕದ ಮನೆಯ ಸವತೆ ಕಾಯಿ .... ಗಜಲಿಂಬೆ ಹಣ್ಣು ...
ಮೆತ್ತಿಗೆ ಕುಳಿತು ಓದುತ್ತಿದ್ದ ಚಂದಮಾಮ,ಕಾಣುತ್ತಿದ್ದ ಕನಸುಗಳು...
ಶಾರುಕ್, ಅಮೀರ್ ಖಾನ್ ಗಳಂತೆ ಇರುವ ಹುಡುಗ ನನ್ನ ಮದುವೆ ಮಾಡಿ ಕೊಳ್ಳುತ್ತಿನಿ...
ಚೂಡಿದಾರ್ ಹಾಕುತ್ತೀನಿ ...
ದಿನಾಲೂ ಸೀರೆ ಬೇಜಾರಪ್ಪ..
(ನಮ್ಮ ಅಪ್ಪಂದಿರು ಅವತ್ತಿನ ಕಾಲಕ್ಕೆ ಚೂಡಿದಾರ್ ಹಾಕಕ್ಕೆ ಬಿಡುತ್ತಿರಲಿಲ್ಲ )
ಅಂತೆಲ್ಲ ಮಾತಾಡಿ ... ನಮ್ಮಲ್ಲಿ ಇಲ್ಲದ ಚೂಡಿದಾರ್ ಕನಸನ್ನ ನನಸಾಗಿಸಲು ....
ಅಕ್ಕನ ಚೂಡಿದಾರ್ ಕಡ ತಗೊಂಡು ಹಾಕಿಕೊಂಡು .... ಹೋಗಿದ್ದು ಇನ್ನು ನೆನಪಿದೆ ( ಇಂದೂ ನನ್ನ ವಾರ್ಡ್ರೋಬ್ ತೆಗದಾಗಲೆಲ್ಲ ಅಣಕಿಸುವ ಮತ್ತೆಂದು ಅಕ್ಕ ಹಾಕದ "ನನಗೆ ಬೇಡ ಅದು" ಅಂದ ನೆನಪು ಮಾಸಲೇ ಇಲ್ಲ ... ಹೀಗೆ ಅಂತ ಗೊತ್ತಿದ್ದರೆ ಅದೇ ಪಿಂಕ್ ತರುತ್ತಿದ್ದೆ ಅಂತ ಮಾತಾಡಿ
ಕೊಂಡರೂ
ಇವತ್ತಿಗೂ ನೋವು ಎದೆಯಾಳದಲ್ಲಿಎಲ್ಲೋ ಕುಳಿತಿದೆ )
ಪಿ ಯು ಸಿ ವರೆಗೆ ಜೊತೆಯಾದ ಅನು... ನಾನು ಡಿಗ್ರೀ ಸೇರುವ ಹೊತ್ತಿಗೆ ಹಸೆಮಣೆ ಏರಿದ್ದಳು,
ಅಮ್ಮ ನ ಸೀರೆಯನ್ನ ಮೊದಲ ಬಾರಿಗೆ ಉಟ್ಟು ಹೋಗಿದ್ದೆ ....
ನಾನು..
ಇಬ್ಬರು ಮಕ್ಕಳು, ಆಮೇಲೆ ನಾವು ಸಿಕ್ಕಿದ್ದೇ ಅಪರೂಪ ... ಸಿಕ್ಕಾಗೆಲ್ಲೋ...
ತರಾತುರಿಯಿಂದ "ಬಾರೇ ನಮ್ಮನಿಗೆ" ಸೆರಗು ಸೊಂಟಕ್ಕೆ ಸಿಕ್ಕಿಸಿ ಒಬ್ಬ ಮಗಳನ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿ,
ಇನ್ನೊಬ್ಬಳನ್ನ ಮಡಿಲಲ್ಲಿ ಕೂರಿಸಿ ಕೊಂಡು ಹೊರಟು ಬಿಡುತ್ತಿದ್ದಾಗ ಮಾತು ತುಂಬಾನೇ ಇತ್ತು......
ಮತ್ತೆ ಅದೇ ದಿನಗಳು ಬರ ಬಾರದೇ.......
ಓದು ಮುಗಿದು ಎರಡು ವರ್ಷ ಕೆಲಸ ಮಾಡಿ ನಾನು ಮದುವೆ ಯಾಗುವ ಹೊತ್ತಿಗೆ ....
ಮಣ-ಬಾರದ ಸೀರೆ ಉಟ್ಟು ... ಗಂಡ -ಮಕ್ಕಳೊಂದಿಗೆ ಬಂದದ್ದು....
ಆಮೇಲೆ ಅವಳ ಬೇಟಿಯಿಲ್ಲ.. ಹೋದಾಗೆಲ್ಲ ಅಮ್ಮನನ್ನ ಕೆಳುತ್ತಿನಿ ... ಅಮ್ಮ ಅನು ಹೇಗಿದ್ದಾಳೆ ? ಸಿಕ್ಕಿದ್ದಳ ?
ಇದು ಬರೇ ಪ್ರಶ್ನೆ ಯಾಗಿಯೇ ಉಳಿಯ ತೊಡಗಿದಾಗ .... ಸುಮ್ಮನಾಗಿದ್ದೆ .....
ದೂರದೂರಲ್ಲಿ ನಮ್ಮ ಕೆಲಸ ಗಳಲ್ಲಿ ಕಳೆದು ಹೋಗುತ್ತಿದ್ದಾಗ ... ಮಿಂಚಿ ಮರೆಯಾಗುವ ನೆನಪುಗಳು....
ಪುಟ್ಟ ಪುಟ್ಟ ಸಂತೋಷಗಳಿಗೆ ತೆರೆದು ಕೊಳ್ಳುತ್ತಿರುವ 'ಅನು' ನನ್ನೆದುರು ಎತ್ತರಕ್ಕೆ ಬೆಳೆಯುತ್ತಿದ್ದಾಳೆ ....
ನಾನು ಕಾಲನ ಬೆನ್ನಟ್ಟಿ ಕಳೆದು ಕೊಂಡ...
ಪುಟ್ಟ ಪುಟ್ಟ ಸಂತೋಷ ಗಳನ್ನ ಮತ್ತೆ ಹೆಕ್ಕಲು ತಯಾರಾಗುತ್ತೇನೆ...
ಯಾಕೆ ಬೇಕಿತ್ತು ಹೆಸರು ... ಕೆಲಸ... ದಿನವಿಡೀ ಮನೆಯಲ್ಲಿದ್ದು ಅಪರಿಚಿತರಂತೆ ... ಲ್ಯಾಪ್ಟಾಪ್ ನಲ್ಲಿ ಕಳೆದು ಹೋಗುವ ನಾವು .... ಕಳೆದು ಕೊಂಡದ್ದೆಲ್ಲಿ.... ನಮ್ಮ ಖುಷಿಯನ್ನ ...
ಮಾರಿಕೊಂಡ ಸ್ವಾಭಿಮಾನವನ್ನ ದಿನವಿಡೀ ಹುಡುಕುವಲ್ಲಿ..........
ಫೋನ್ ನಾಯಿಸುತ್ತೇನೆ..... ನಾಟ್ ರಿಚೆಬಲ್ ........